ನಗರದ ಯುಬಿಡಿಟಿ ಕಾಲೇಜಿನಲ್ಲಿ ಇಂದು ಕಾರ್ಯಾಗಾರ

ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಸಿವಿಲ್ ವಿಭಾಗದಿಂದ ಸುಸ್ಥಿರ ಅಭಿವೃದ್ಧಿಗಾಗಿ ನೀರಿನ ನಿರ್ವಹಣೆ ಕುರಿತು ಕಾರ್ಯಾಗಾರ ನಡೆಯಲಿದೆ. ಅತಿಥಿಗಳಾಗಿ ಪಾಲಿಕೆ ಆಯುಕ್ತೆ ರೇಣುಕಾ, ಕೆಎಸ್‌ಪಿಎಸ್ ಪ್ರಾದೇಶಿಕ ಕಚೇರಿ ಅಧಿಕಾರಿ ಡಾ. ಹೆಚ್. ಲಕ್ಷ್ಮಿಕಾಂತ ಪಾಲ್ಗೊಳ್ಳಲಿದ್ದು,  ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಿಕೊಳ್ಳುತ್ತಾರೆ. ಡಾ. ಎಸ್. ಮಂಜಪ್ಪ, ಡಾ. ಹೆಚ್.ಎಮ್. ದಿವಾಕರ್ ಭಾಗವಹಿಸಲಿದ್ದಾರೆ.

error: Content is protected !!