ನಗರದಲ್ಲಿಂದು ಐರಣಿ ಹೊಳೆಮಠದ ವಾರ್ಷಿಕೋತ್ಸವ, ಗುರುಪೂರ್ಣಿಮೆ

ಐರಣಿ ಹೊಳೆಮಠ ಮಹಾಸಂಸ್ಥಾನ ಶಾಖಾಮಠದಲ್ಲಿ ಗುರುಪೌರ್ಣಿಮೆ ಹಾಗೂ ಶಾಖಾಮಠದ 17ನೇ ವಾರ್ಷಿಕೋತ್ಸವ ಸಮಾರಂಭವು ಇಂದು ಮತ್ತು ನಾಳೆ ನಡೆಯಲಿದೆ.

ಎರಡು ದಿನಗಳ ಬೆಳಿಗ್ಗೆ 7.30 ಕ್ಕೆ ಸತ್ಸಂಗ, ಭಜನೆ, ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ  ಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ಗುರುಪೌರ್ಣಿಮೆ ಜರುಗುವುದು. ಕುಳ್ಳೂರು ಬಸವಾನಂದ ಭಾರತಿ ಸ್ವಾಮೀಜಿ ಮತ್ತು ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ.

ನಾಳೆ ಭಾನುವಾರ ಅಖಂಡ ಗುರು ಭಜನೆ, ಪಂಚಾಮೃತ ಅಭಿಷೇಕ, ಕೈಲಾಸ ಮಹಾಪೂಜೋತ್ಸವ ದರ್ಶನ, ಮಹಾಮಂಗಳಾರತಿ, ಮಹಾಪ್ರಸಾದವಿದ್ದು, ಪ್ರತಿ ದಿನ ಸಂಜೆ ಭಕ್ತಿ ಗೀತೆ ಕಾರ್ಯಕ್ರಮ ನಡೆಯಲಿದೆ.

error: Content is protected !!