ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ

ದಾವಣಗೆೆರೆ, ಜು. 7- ಕರ್ನಾಟಕ ಯುವ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ  ಎಂದು ರಾಜ್ಯಾಧ್ಯಕ್ಷ ಸುನೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ 24 ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ದಾವಣಗೆರೆ ಜಿಲ್ಲೆಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗುವುದು ಎಂದರು.

ಜಿಲ್ಲಾ ಪದಾಧಿಕಾರಿಗಳು: ಎಸ್.ಆರ್. ಶ್ಯಾಮ್ ಪ್ರಸಾದ್ (ಜಿಲ್ಲಾಧ್ಯಕ್ಷರು), ನಾಗರತ್ನಮ್ಮ (ಮಹಿಳಾ ಘಟಕದ ಅಧ್ಯಕ್ಷರು), ಅರುಣ್ ಜಿ. ರೇವಣಕರ್, ಗೌತಮ್ ಎಸ್. ಕದಂ (ಉಪಾಧ್ಯಕ್ಷರು), ಸುಧೀರ್ ಜಿ. ಶೇಟ್ (ಕಾರ್ಯಾಧ್ಯಕ್ಷರು),ಕೆ.ಎಸ್. ಈಶ್ವರಪ್ಪ, ರುದ್ರಾಚಾರ್, ಕಿರಣ್ ವಿಠಲ್‌ಭಟ್, ವೀರೇಶ ನಾಗಪ್ಪ ಹಾವನೂರು, ಗಿರೀಶ್ ಪಿ. ಶೇಟ್ (ಕಾರ್ಯದರ್ಶಿಗಳು)ಇವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!