ನಗರದಲ್ಲಿ ಇಂದು ಈಶ್ವರಮ್ಮ ಶಾಲಾ ಮಂತ್ರಿ ಮಂಡಲ ಪ್ರತಿಜ್ಞಾ ಸ್ವೀಕಾರ

ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಶಾಲಾ ಮಂತ್ರಿ ಮಂಡಲ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ತಿಳಿಸಿದ್ದಾರೆ.

ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರಪಾಲಿಕೆ ಮಾಜಿ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥಗೌಡ, ಭರತಾಂಜಲಿ ಅಕಾಡೆಮಿ ಫಾರ್ ಫರ್‍ಫಾರ್ಮಿಂಗ್ ಆರ್ಟ್ಸ್ ನೃತ್ಯ ನಿರ್ದೇಶಕ ಡಾ.ಬಿ. ಮಂಗಳಾ ಶೇಖರ್, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷ ಎ.ಎ.ಆರ್. ಉಷಾ ರಂಗನಾಥ್, ಕಾರ್ಯದರ್ಶಿ ಜಿ.ಆರ್. ವಿಜಯಾನಂದ್, ಖಜಾಂಚಿ ಎ.ಪಿ. ಸುಜಾತ, ಸದಸ್ಯ ಕೆ.ವಿ. ಸುಜಾತ,   ಉಪಪ್ರಾಂಶುಪಾಲ ಜಿ.ಎಸ್.ಶಶಿರೇಖಾ ಭಾಗವಹಿಸಲಿದ್ದಾರೆ.

error: Content is protected !!