ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸುಧೀಂದ್ರರಾವ್ ಆಯ್ಕೆ

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸುಧೀಂದ್ರರಾವ್ ಆಯ್ಕೆ

ದಾವಣಗೆರೆ, ಜು. 5- ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸಂಘದ ಮಾಜಿ ಅಧ್ಯಕ್ಷರೂ, ಹಿರಿಯ ತೆರಿಗೆ ಸಲಹೆಗಾರರೂ ಆದ ಹೆಚ್.ಟಿ. ಸುಧೀಂದ್ರರಾವ್ ಆಯ್ಕೆಯಾಗಿದ್ದಾರೆ.

ಸಂಘಕ್ಕೆ ಕಳೆದ ವಾರ ನಡೆದ ಚುನಾವಣೆಯಲ್ಲಿ ಹೆಚ್.ಟಿ. ಸುಧೀಂದ್ರರಾವ್ ನೇತೃತ್ವದ ಎಲ್ಲಾ 17 ಜನರೂ ಆಯ್ಕೆಯಾದ ನಂತರ ಸಂಘದ ಕಛೇರಿಯಲ್ಲಿ ಇಂದು ನಡೆದ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.

ಸಂಘದ ಗೌರವ ಅಧ್ಯಕ್ಷರಾಗಿ ಡಿ.ಆರ್. ಶಂಕರ್, ಉಪಾಧ್ಯಕ್ಷರಾಗಿ ಹೆಚ್.ವಿ. ಸುರೇಶ್, ಕಾರ್ಯದರ್ಶಿಗಳಾಗಿ ಜಿ. ಮಹಾಂತೇಶ್, ಸಹ ಕಾರ್ಯದರ್ಶಿಗಳಾಗಿ ಶಿವಪ್ರಸನ್ನ ಎನ್.ವಿ., ಖಜಾಂಚಿಯಾಗಿ ಡಿ.ಆರ್. ಬಸವರಾಜ್ ಆಯ್ಕೆಯಾಗಿದ್ದಾರೆ.

ಕೆ.ಎಸ್. ಶಿವಕುಮಾರಪ್ಪ,  ಕೆಸಿ ನಾಗರಾಜ್, ಮೃತ್ಯುಂಜಯ ಎಂ.ಎಸ್.,  ಎಚ್.ಬಿ. ಸುರೇಶ್  ಬಿ.ಎನ್. ರೇವಣಸಿದ್ದಪ್ಪ,  ಫಯಾಜ್ ಅಹಮದ್,  ಬಸವರಾಜ ಎಂ.ಸಿ., ಬಸವೇಶ್ವರ ಎಂ.ಎಂ.,  ಎಸ್.ಪಿ. ಚಂದ್ರು,  ಪ್ರಶಾಂತ್ ಕುಮಾರ್ ಬಿ.ಎಂ.,  ಕೆ.ಎಚ್. ಮಹೇಶ್ ಅವರುಗಳು ಸಂಘದ ನಿರ್ದೇಶಕರುಗಳಾಗಿದ್ದಾರೆ.

error: Content is protected !!