ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಷಾಢ ಮಾಸದ ಅಂಗವಾಗಿ ಶ್ರೀಮಠದ ಶಿಲಾಮಂದಿರ ಜೀರ್ಣೋದ್ಧಾರ, ಲೋಕ ಕಲ್ಯಾಣಾರ್ಥ, ಮಳೆ, ಬೆಳೆ ಸಿದ್ಧಿಗಾಗಿ ಶ್ರೀ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ಸನ್ನಿಧಾನದಲ್ಲಿ ಇಂದಿನಿಂದ ಇದೇ ದಿನಾಂಕ 16 ರವರೆಗೆ 11 ದಿನಗಳ ಪರ್ಯಂತರ ಬ್ರಾಹ್ಮೀ ಮುಹೂರ್ತ 3 ಗಂಟೆಯಿಂದ ಸೂರ್ಯೋದಯದ ಒಳಗೆ ಪೂಜಾನುಷ್ಟಾನ ಕೈಗೊಂಡಿದ್ದಾರೆ.
July 6, 2024