ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಹಾಗು ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಇಂದು ಶುಕ್ರವಾರ ಬೆಳಿಗ್ಗೆ ರುದ್ರಾಭಿಷೇಕ, ಮಧ್ಯಾಹ್ನ ಅಲಂಕಾರ ಪೂಜೆ ನಡೆಯುವುದು. ನಂತರ ದಾಸೋಹ ಏರ್ಪಡಿಸಲಾಗಿದೆ. ಸರ್ವಭಕ್ತರು ಆಗಮಿಸಲು ಕೋರಲಾಗಿದೆ. ಶ್ರೀಮತಿ ದೇವರಮನಿ ರೇಖಾ ವಿಜಯಕುಮಾರ್, ಅಪರ್ಣ ಕುಟುಂಬ, ಧಾರವಾಡ ಇವರು ದಾಸೋಹ ಸೇವೆ ಏರ್ಪಡಿಸಿದ್ದಾರೆ.
ಇಂದು ಅಮವಾಸ್ಯೆ : ನಗರದ ದಾನಮ್ಮ ದೇವಿ ದೇವಸ್ಥಾನದಲ್ಲಿ ರುದ್ರಾಭಿಷೇಕ
![25 danamma 08.12.2023 ಇಂದು ಅಮವಾಸ್ಯೆ : ನಗರದ ದಾನಮ್ಮ ದೇವಿ ದೇವಸ್ಥಾನದಲ್ಲಿ ರುದ್ರಾಭಿಷೇಕ](https://janathavani.com/wp-content/uploads/2023/12/25-danamma-08.12.2023.jpg)