ಲಯನ್ಸ್ ಅಧ್ಯಕ್ಷರಾಗಿ ಉಳುವಯ್ಯ

ಲಯನ್ಸ್ ಅಧ್ಯಕ್ಷರಾಗಿ ಉಳುವಯ್ಯ

ದಾವಣಗೆರೆ, ಜೂ.29- ನಗರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೈಗಾರಿಕೋದ್ಯಮಿ ಎಸ್.ಜಿ .ಉಳುವಯ್ಯ ಆಯ್ಕೆಯಾಗಿದ್ದು, ನಾಡಿದ್ದು ದಿನಾಂಕ 1ರ ಸೋಮವಾರ ಸಂಜೆ 5.30ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕಾರ್ಯದರ್ಶಿಯಾಗಿ ಶಿಕ್ಷಕರೂ ಆಗಿರುವ ಕಲಾವಿದ ಸಿ. ಅಜಯ್ ನಾರಾಯಣ, ಖಜಾಂಚಿಯಾಗಿ ಎಸ್. ನಾಗರಾಜ್, ಸಹ ಕಾರ್ಯದರ್ಶಿಯಾಗಿ  ಹೆಚ್.ಎನ್. ನಾಗರಾಜ್ ಆಯ್ಕೆಯಾಗಿದ್ದಾರೆ. 

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಜಿಲ್ಲಾ ಲಯನ್ಸ್ ನಿಕಟ ಪೂರ್ವ ರಾಜ್ಯಪಾಲ ವಿ.ಜಿ. ಶೆಟ್ಟಿ ಅವರು ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸುವರು. ಜಿಲ್ಲಾ ಲಯನ್ಸ್ ನಿಕಟಪೂರ್ವ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸುವರು.

error: Content is protected !!