ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಚುನಾವಣೆ ಸುಧೀಂದ್ರರಾವ್ ತಂಡಕ್ಕೆ ಭರ್ಜರಿ ಬಹುಮತ

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಚುನಾವಣೆ  ಸುಧೀಂದ್ರರಾವ್ ತಂಡಕ್ಕೆ ಭರ್ಜರಿ ಬಹುಮತ

ದಾವಣಗೆರೆ, ಜೂ.29- ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ತೆರಿಗೆ ಸಲಹೆಗಾರ ಹೆಚ್.ಟಿ. ಸುಧೀಂದ್ರರಾವ್ ಅವರ ನೇತೃತ್ವದ ತಂಡಕ್ಕೆ ಭರ್ಜರಿ ಬಹುಮತ ಲಭಿಸಿದೆ.

ಸಂಘದ ಆಡಳಿತ ಮಂಡಳಿಯ ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್.ಟಿ. ಸುಧೀಂದ್ರರಾವ್ ಅವರಲ್ಲದೇ, ಅವರ ಗುಂಪಿನಿಂದ ಸ್ಪರ್ಧೆ ಮಾಡಿದ್ದ ಎಲ್ಲಾ 17 ಜನರೂ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಹೆಚ್.ಟಿ. ಸುಧೀಂದ್ರರಾವ್ ಅವರು ಅತ್ಯಧಿಕ 102 ಮತಗಳನ್ನು ಪಡೆಯುವುದರೊಂದಿಗೆ ಮತಗಳ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೆಚ್.ವಿ. ಸುರೇಶ್ (99), ಡಿ.ಆರ್. ಶಂಕರ್ (97), ಹೆಚ್.ವಿ. ಸುರೇಶ್ (93), ಕೆ.ಸಿ. ನಾಗರಾಜ್ (93), ಎಂ.ಎಸ್. ಮೃತ್ಯುಂಜಯ (91), ಕೆ.ಎಸ್. ಶಿವಕುಮಾರಪ್ಪ (89), ಜಿ.ಮಹಾಂತೇಶ (88), ಎಂ.ಸಿ. ಬಸವರಾಜ್ (88), ಬಿ.ಎನ್. ರೇವಣಸಿದ್ದಪ್ಪ (88), ಎನ್.ವಿ. ಶಿವಪ್ರಸನ್ನ ಕುಮಾರ್ (87), ಎಂ.ಎಂ. ಬಸವೇಶ್ವರ (84), ಫಯಾಜ್ ಅಹ್ಮದ್ (77), ಬಿ.ಎಂ. ಪ್ರಶಾಂತ್ ಕುಮಾರ್ (75), ಡಿ.ಆರ್. ಬಸವರಾಜ್ (76), ಎಸ್.ಪಿ. ಚಂದ್ರ (73), ಕೆ.ಹೆಚ್. ಮಹೇಶ್ (74) ಅವರುಗಳು ಆಯ್ಕೆಯಾಗಿದ್ದಾರೆ.

ಸುಧೀಂದ್ರರಾವ್ ತಂಡದ ವಿರುದ್ಧ ಸ್ಪರ್ಧಿಸಿದ್ದ ಸಂಘದ ಹಾಲಿ  ಅಧ್ಯಕ್ಷರಾಗಿದ್ದ ಜಂಬಗಿ ರಾಧೇಶ್ ಅವರೂ ಸೇರಿದಂತೆ ಅವರ ತಂಡದ ಎಲ್ಲರೂ ಪರಾಭವಗೊಂಡಿದ್ದಾರೆ.

ಜಂಬಗಿ ರಾಧೇಶ್ (69), ಬಿ.ಜಿ. ಬಸವರಾಜಪ್ಪ (54), ಆರ್.ಎನ್. ಧನಂಜಯ (52), ಬಿ.ವಿನಯ್ ಕುಮಾರ್ (50),  ಹೆಚ್.ಎಸ್. ಮಂಜುನಾಥ (49), ರಾಮನಗೌಡ ಎಸ್.ಗೌಡರ್ (47), ಬಿ.ಮಂಜುನಾಥ (46), ಎಸ್.ರವಿಕುಮಾರ್ (45),   ಆರ್.ಎಸ್.ಸುಬ್ರಹ್ಮಣ್ಯಂ (43), ಎ. ವಿಶ್ವನಾಥ (37), ಜಿ.ಎನ್. ಪರಶುರಾಮ್ (36), ಪಿ.ಆರ್. ದಿನೇಶ್ (35), ಹೆಚ್.ಎಸ್. ನಾಗರಾಜ ರಾವ್ (35), ಕೆ.ಎಸ್. ವೀರಣ್ಣ (35), ಉಮೇಜಾಹ್ಮದ್ ಮುಸ್ತಾಫಾ (33),  ಎಂ.ಝಡ್. ವಾಸಿಂ ಅಕ್ರಮ್ (33), ಕೆ.ಎಸ್. ರುದ್ರಸ್ವಾಮಿ (32) ಅವರುಗಳು ಪರಾಭವಗೊಂಡಿದ್ದಾರೆ.

ನಗರದ ಜಯದೇವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಕೆ.ಎನ್.ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದರು. ಅವರಿಗೆ ಎಂ.ಎಂ. ಲಿಂಗರಾಜ್ ಮತ್ತು ಕೇಶವ್ ಸಹಾಯಕರಾಗಿದ್ದರು.

ಅಭಿನಂದನೆ : ಹಿರಿಯ ತೆರಿಗೆ ಸಲಹೆಗಾರ ಹೆಚ್.ಟಿ. ಸುಧೀಂದ್ರರಾವ್ ಅವರು ಈ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದು, ಇದೀಗ ಮತ್ತೊಂದು ಅವಧಿಗೆ ನಿರ್ದೇಶಕರಾಗಿದ್ದಾರೆ. ಅವರೂ ಸೇರಿದಂತೆ ಅವರ ತಂಡದ ಎಲ್ಲರನ್ನೂ ತೆರಿಗೆ ಸಲಹೆಗಾರರಾದ ಹೆಚ್. ಬಸವರಾಜ್, ಟಿ. ಕೊಟ್ರೇಶ್, ಎನ್. ರವಿ, ಎ. ಕೊಟ್ರಬಸವರಾಜೇಂದ್ರ, ವಿ.ಎ. ಶ್ರೀಹರ್ಷ ಮತ್ತಿತರರು ಅಭಿನಂದಿಸಿದ್ದಾರೆ.

error: Content is protected !!