ಸಿರಿಗೆರೆಯಲ್ಲಿಂದು ಕಾಶಿ ಮಹಾಲಿಂಗ ಶ್ರೀಗಳ ಪರುವು

ಸಿರಿಗೆರೆಯಲ್ಲಿಂದು ಕಾಶಿ ಮಹಾಲಿಂಗ ಶ್ರೀಗಳ ಪರುವು

ಮಳೆಗಾಗಿ ಪ್ರಾರ್ಥಿಸಿ, ತರಳಬಾಳು ಬೃಹನ್ಮಠದ ವಿರಕ್ತ ಚೇತನರಾಗಿದ್ದ ಕಾಶಿ ಮಹಾಲಿಂಗ ಸ್ವಾಮೀಜಿ ಪರುವು ಮಾವಿನ ತೋಪಿನ ಅವರ ಗದ್ದುಗೆ ಆವರಣದಲ್ಲಿ ಇಂದು ನಡೆಯಲಿದೆ.

ಸಿರಗೆರೆ ಭಾಗದಲ್ಲಿ ಮಳೆ ಕೊರತೆ ಉಂಟಾದಾಗ ಜನರು ಕಾಶಿ ಗುರುಗಳ ಭಾವಚಿತ್ರ ಮೆರವಣಿಗೆ ಮಾಡುವುದು, ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಅವರ ಗದ್ದುಗೆ ಪೂಜೆ ಮಾಡಿ ದಾಸೋಹ ಏರ್ಪಡಿಸುವುದು ವಾಡಿಕೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ ಜನರ ನಿರೀಕ್ಷೆಗೆ ಅನುಗುಣವಾಗಿ ಮಳೆಯಾಗಿ ಕೃಷಿಕರನ್ನು ಕೈ ಹಿಡಿದಿರುವುದು ಅವರ ಮೇಲಿನ ಅನನ್ಯ ಶ್ರದ್ಧಾ ಭಕ್ತಿಗೆ ಕಾರಣವಾಗಿದೆ.

ಹಾಗಾಗಿ ನಿನ್ನೆ ರಾತ್ರಿಯಿಂದಲೇ ಅವರ ಗದ್ದುಗೆ ಆವರಣದಲ್ಲಿ ಭಜನೆ ಕಾರ್ಯಕ್ರಮ ನಡೆಸಲಾಯಿತು. ಇಂದು ಬೆಳಗಿನ ಜಾವದಿಂದ ಅವರ ಸಮಾಧಿ ಮಂಟಪದಲ್ಲಿ ವಿಶೇಷ ಪೂಜೆ ನಡೆಯಲಿದೆ.

ಪರುವು ಅಂಗವಾಗಿ ಸಿರಿಗೆರೆ ಹಾಗೂ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ಜನರಿಗೂ ಮಾವಿನ ತೋಪಿನ ಅವರ ಮಂಟಪದ ಬಳಿ ದಾಸೋಹ ಏರ್ಪಡಿಸಲಾಗಿದೆ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿ ದಾಸೋಹಕ್ಕೆ ಚಾಲನೆ ನೀಡಲಿದ್ದಾರೆ.

error: Content is protected !!