ಹೊನ್ನಾಳಿಗೆ ಇಂದು ಧನಂಜಯ ಸರ್ಜಿ, ಎಸ್ಎಲ್ ಭೋಜೇಗೌಡ

ಹೊನ್ನಾಳಿಗೆ ಇಂದು ಧನಂಜಯ ಸರ್ಜಿ, ಎಸ್ಎಲ್ ಭೋಜೇಗೌಡ

ವಿಧಾನ ಪರಿಷತ್ ಚುನಾವಣೆ ಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಧನಂಜಯ್ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಸ್‌.ಎಲ್. ಭೋಜೇಗೌಡ ಅವರು ಇಂದು ಹೊನ್ನಾಳಿಗೆ ಆಗಮಿಸಲಿದ್ದಾರೆ.

ಪಟ್ಟಣದ ಗುರುಭವನದಲ್ಲಿ ಇಂದು ಬೆಳಿಗ್ಗೆ 11ಕ್ಕೆ ನಡೆಯುವ ಪಕ್ಷದ ಅಭಿನಂದನೆ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಪಾಲ್ಗೊಳ್ಳಲಿದ್ದಾರೆ.  ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ವಹಿಸಲಿದ್ದು, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ತಾಲ್ಲೂಕು ಮುಖಂಡರು ಭಾಗವಹಿಸುವರು.

error: Content is protected !!