ನಗರದ ಶ್ರೀರಾಮ ದೇವಸ್ಥಾನದಲ್ಲಿ ಇಂದು-ನಾಳೆ `ಯಕ್ಷಪಕ್ಷ’ ಕಾರ್ಯಕ್ರಮಗಳು

ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಬೆಂಗಳೂರು ವತಿಯಿಂದ `ಯಕ್ಷಪಕ್ಷ’ ತಾಳ ಮದ್ದಲೆ ಕೂಟಗಳು ನಗರದ ಪಿ.ಜೆ.ಬಡಾವಣೆ ಯಲ್ಲಿರುವ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನದಲ್ಲಿ ಇಂದು ಮತ್ತು ನಾಳೆ ನಡೆಯಲಿವೆ. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.  ಇಂದು `ವಾಮನ ಚರಿತ್ರೆ’ ಪ್ರಸಂಗವಿದ್ದು, ನಾಳೆ ಗುರುವಾರ `ಶ್ರೀರಾಮ ನಿರ್ಯಾ ಣ’ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್, ಎ.ಪಿ.ಫಾಟಕ್ ಮತ್ತು ಅರ್ಥಧಾರಿಗಳಾಗಿ ಉಮಾ ಕಾಂತ್ ಭಟ್, ವಾಸುದೇವ ರಂಗ ಭಟ್, ಶೇಣಿ ವೇಣುಗೋಪಾಲ್ ಭಟ್, ಅಜಿತ್ ಕಾರಂತ್ ಮತ್ತು ಸುಹಾಸ್ ಮರಾಠೆ ಪಾಲ್ಗೊಳ್ಳುವರು.

error: Content is protected !!