ದಮನಿತರ ನೋವಿಗೆ ಸದಾ ಮಿಡಿಯುತ್ತಿದ್ದ ನೈಜ ಅಂಬೇಡ್ಕರ್ ವಾದಿ ಈಶ್ವರಪ್ಪ

ಮಾಜಿ ಸಚಿವ ಹೆಚ್. ಆಂಜನೇಯ

ದಾವಣಗೆರೆ, ಜೂ. 2 – ಬಹುಮುಖ ಪ್ರತಿಭೆಯ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಮಾಜಿ ಸಚಿವ ಹೆಚ್. ಆಂಜನೇಯ, ಈಶ್ವರಪ್ಪ ಅವರ ಆಶಯಗಳನ್ನು ಮುಂದು ವರೆಸುವ ಕಾರ್ಯವೊಂದೇ ನಾವು ಸಲ್ಲಿಸ ಬಹುದಾದ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ. 

ಈಶ್ವರಪ್ಪ ಅವರು, ದಮನಿತರ ನೋವಿಗೆ ಸದಾ ಮಿಡಿಯುತ್ತಿದ್ದ ನೈಜ ಅಂಬೇಡ್ಕರ್ ವಾದಿಯಾಗಿದ್ದರು. ಅವರ ಕಣ್ಮರೆಯಿಂದ ನಮ್ಮ ಹಿರಿಯ ಮಾರ್ಗ ದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ನಾಲ್ಕೂವರೆ ದಶಕಗಳ ತಮ್ಮ ಜನಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೀಡಿದ್ದ ಪ್ರೋತ್ಸಾಹವನ್ನು ಸ್ಮರಿಸಿಕೊಂಡಿರುವ ಆಂಜನೇಯ, `ಬಹು ಶ್ರುತ ವಿದ್ವಾಂಸರಾಗಿದ್ದ ಈಶ್ವರಪ್ಪನವರ ಅಗಲಿಕೆಯಿಂದ   ನಗರದ ಸಾಹಿತ್ಯ, ನಾಟಕ ಹಾಗೂ ಭಾಷಾಪರ ಕಾರ್ಯಕ್ರಮಗಳಲ್ಲಿ ಉಂಟಾಗಿರುವ ಶೂನ್ಯ ತುಂಬಲಾರದ್ದು ಎಂದಿದ್ದಾರೆ.

error: Content is protected !!