ಸಪ್ಪು ತರಲು ಹೋಗಿದ್ದ ಕುರಿಗಾಹಿ ವಿದ್ಯುತ್ ತಗುಲಿ ಸಾವು

ಮಲೇಬೆನ್ನೂರು, ಮೇ 29 – ಕುರಿಗಳಿಗೆ ಸಪ್ಪು ತರಲೆಂದು ಹೋಗಿದ್ದ ಕುರಿ ಕಾಯುವ ಯುವಕ ವಿದ್ಯುತ್ ತಂತಿ ತಗುಲಿ ಮರದಲ್ಲೇ ಸಾವಿಗೀಡಾದ ಘಟನೆ ಹೊಸ ಪಾಳ್ಳ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. 

ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದ ಕೊಟ್ರೇಶ್ ಎಂಬ 22 ವರ್ಷದ ಯುವಕ ಕುರಿ ಹಿಂಡನ್ನು ಹೊಡೆದು ಕೊಂಡು ಮೇಯಿಸುತ್ತಾ ಪಾಳ್ಯ ಗ್ರಾಮದಲ್ಲಿ ಬಿಡಾರ ಹೂಡಿದ್ದ ಎನ್ನಲಾಗಿದೆ. ಕೊಟ್ರೇಶ್, ಎಂದಿನಂತೆ ಬುಧವಾರ ಬೆಳಗ್ಗೆ ಕುರಿಗಳಿಗೆ ಸಪ್ಪು ತರಲೆಂದು ಮರವೊಂದನ್ನು ಏರಿ ಸಪ್ಪು ಮುರಿಯುವಾಗ ವಿದ್ಯುತ್ ತಂತಿ ಸ್ಪರ್ಶ ವಾಗಿ ಅಲ್ಲಿಯೇ ಮೃತಪಟ್ಟಿದ್ದಾನೆ.

error: Content is protected !!