ನಗರದ ದೃಶ್ಯಕಲಾ ವಿದ್ಯಾಲಯದಲ್ಲಿ ಇಂದು ಭಿತ್ತಿಚಿತ್ರ ಶಿಬಿರ

ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 7 ದಿನಗಳ ಭಿತ್ತಿಚಿತ್ರ ಕಲಾ ಶಿಬಿರದಲ್ಲಿ ಇಂದು ಮುಂಜಾನೆ 6.30ಕ್ಕೆ ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ಡಾ. ಸಂತೋಷ್ ಕುಮಾರ್ ಕುಲಕರ್ಣಿ ಅವರು ಧ್ವಜಾರೋಹಣ ನೆರವೇರಿಸುವರು.

ಸಂಜೆ 5.30ರ ಕಾರ್ಯಕ್ರಮದಲ್ಲಿ `ಬಣ್ಣಗಳು’ ವಿಷಯ ಕುರಿತು ದಾವಣಗೆರೆ ವಿವಿ ಜೀವ ರಾಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಸಂತೋಷ್ ಕುಮಾರ್ ಅವರು ಉಪನ್ಯಾಸ ನೀಡುವರು. ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ಅವರು  ಮುಖ್ಯ ಅತಿಥಿಯಾಗಿದ್ದಾರೆ.

error: Content is protected !!