ನಗರದಲ್ಲಿ ಇಂದಿನಿಂದ ಜೂ.2 ರವರೆಗೆ ಭಿತ್ತಿ ಚಿತ್ರ ಕಲಾ ಶಿಬಿರ

ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ಭಿತ್ತಿಚಿತ್ರ ಕಲಾ ಶಿಬಿರವನ್ನು ಇಂದಿನಿಂದ ಬರುವ ಜೂನ್ 2 ರವರೆಗೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 10.30ಕ್ಕೆ ಶಿಬಿರದ ಉದ್ಘಾಟನಾ ಸಮಾರಂಭ ಏರ್ಪಾಡಾಗಿದ್ದು, ದಾವಣಗೆರೆ ವಿವಿ ಕುಲಸಚಿವ ಡಾ. ಯು.ಎಸ್. ಮಹಾಭಲೇಶ್ವರ ಶಿಬಿರವನ್ನು ಉದ್ಘಾಟಿಸುವರು. 

ಕಾಲೇಜಿನ ಪ್ರಾಂಶುಪಾಲ ಡಾ. ಜಯರಾಜ ಎಂ. ಚಿಕ್ಕಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ದಾವಣಗೆರೆ ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಅಶೋಕ ಕುಮಾರ ವಿ. ಪಾಳೇದ ಮತ್ತು ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಎ. ಮಹಲಿಂಗಪ್ಪ ಮುಖ್ಯ ಅತಿಥಿಗಳಾಗಿದ್ದಾರೆ.

error: Content is protected !!