ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಶ್ರೀ ದೇವಿಗೆ ಪಂಚರಂಗಿ ಅಲಂಕಾರ ಪೂಜೆ ನೆರವೇರಲಿದೆ.
ವಾಸವಿ ಭಜನಾ ಮಂಡಳಿ ಇವರಿಂದ ಇಂದು ಬೆಳಿಗ್ಗೆ 6ಕ್ಕೆ ವಾಸವಿ ಸುಪ್ರಭಾತ, 8ಕ್ಕೆ ಸೇವಾಕರ್ತರ ಸ್ವಹಸ್ತದಿಂದ ಕ್ಷೀರಾಭಿಷೇಕ. 11.30ರಿಂದ ಸೇವಾಕರ್ತ ದಂಪತಿಗಳಿಂದ ಅಮ್ಮನವರ ತೊಟ್ಟಿಲು ಸೇವಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 6ರಿಂದ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ರಾಜಬೀದಿ ಉತ್ಸವ ನೆರವೇರಲಿದೆ ಎಂದು ಸಂಘದ ಅಧ್ಯಕ್ಷ ಆರ್. ಎಲ್. ಪ್ರಭಾಕರ್, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ ತಿಳಿಸಿದ್ದಾರೆ.