ಸಿರಿಗೆರೆಯ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು

ಸಿರಿಗೆರೆಯ ಸದ್ಧರ್ಮ  ನ್ಯಾಯಪೀಠಕ್ಕೆ ಬಿಡುವು

ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಇಂದು ಮತ್ತು ಇದೇ ದಿನಾಂಕ 20ರ ಸೋಮವಾರ ನಡೆಯಬೇಕಿದ್ದ ಸದ್ಧರ್ಮ ನ್ಯಾಯಪೀಠದ ಕಾರ್ಯ ಕಲಾಪಗಳನ್ನು ಮುಂದೂಡಲಾಗಿದೆ.  ಮಸ್ಕತ್‌ ಮತ್ತು ದುಬೈಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ  ಜಗದ್ಗುರು ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿರುವ ಕಾರಣ, ನ್ಯಾಯಪೀಠದ ಕಾರ್ಯ ಕಲಾಪಗಳು ನಡೆಯುವುದಿಲ್ಲ ಎಂದು ನ್ಯಾಯಪೀಠದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!