ಸೈನಿಕ ಹನುಮಂತಪ್ಪ ಇಂದು ವಾಪಸ್‌ ಸ್ವಗ್ರಾಮಕ್ಕೆ

ಸೈನಿಕ ಹನುಮಂತಪ್ಪ ಇಂದು ವಾಪಸ್‌ ಸ್ವಗ್ರಾಮಕ್ಕೆ

ಭಾರತೀಯ ಭೂಸೇನೆ ಯಲ್ಲಿ ಸೈನಿಕರಾಗಿ 17 ವರ್ಷಗಳ ಕಾಲ ದೇಶ ರಕ್ಷಣೆ ಮಾಡಿ, ನಿವೃತ್ತರಾಗಿರುವ ಹರಿಹರ ತಾಲ್ಲೂಕು ಹರಳಹಳ್ಳಿಯ ಹನಮಂತಪ್ಪ ಡಿ.ಹೆಚ್. ಅವರು ಇಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

ಮಧ್ಯಾಹ್ನ 3 ಕ್ಕೆ ಹರಳಹಳ್ಳಿ ಗ್ರಾಮಸ್ಥರಿಂದ ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆಯಿಂದ ಪಿ.ಡಬ್ಲ್ಯೂಡಿ ಕಛೇರಿವರೆಗೂ ಹಾಗೂ ಹರಳ ಹಳ್ಳಿ ಬಸ್‌ ನಿಲ್ದಾಣದಿಂದ ಶ್ರೀ ಆಂಜನೇಯ ದೇವಸ್ಥಾನದವ ರೆಗೂ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಸಂಜೆ 5ಕ್ಕೆ ಹರಳಹಳ್ಳಿ ಗ್ರಾಮಸ್ಥ ರಿಂದ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯುವುದು.

error: Content is protected !!