ಅಂಕಲಿಮಠದ ಜಾತ್ರೆ : ನಾಳೆ ಸಭೆ

ದಾವಣಗೆರೆ, ಮೇ 1 – ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ತಲೆಕಟ್ಟು ಗ್ರಾಮದ ಅಂಕಲಿಮಠದ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವ ಹಾಗೂ ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಾಂಗಲ್ಯ ಭವನದ ಲೋಕಾರ್ಪಣೆಯ ಸಂಬಂಧ ನಾಡಿದ್ದು ದಿನಾಂಕ 3 ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್‌ ಕಾಲೇಜು ಬೆಳ್ಳಿಗಿರಿ ವಸತಿ ಗೃಹದಲ್ಲಿ ಪೂರ್ವಭಾವಿ ಸಭೆಯನ್ನು ಅಂಕಲಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಟಿಜೆ ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ತಿಳಿಸಿದ್ದಾರೆ.

error: Content is protected !!