ಭೂಸೇನೆಯಿಂದ ನಿವೃತ್ತರಾಗಿ ಸೈನಿಕ ಹನುಮಂತಪ್ಪ ವಾಪಸ್‌ ಸ್ವಗ್ರಾಮಕ್ಕೆ

ಭೂಸೇನೆಯಿಂದ ನಿವೃತ್ತರಾಗಿ ಸೈನಿಕ ಹನುಮಂತಪ್ಪ ವಾಪಸ್‌ ಸ್ವಗ್ರಾಮಕ್ಕೆ

ಹರಿಹರ, ಏ. 29 – ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ 17 ವರ್ಷಗಳ ಕಾಲ ದೇಶ ರಕ್ಷಣೆ ಮಾಡಿ, ನಿವೃತ್ತರಾಗಿರುವ ಹರಿಹರ ತಾಲ್ಲೂಕು ಹರಳಹಳ್ಳಿಯ ಹನಮಂತಪ್ಪ ಡಿ.ಹೆಚ್. ಅವರು ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

ಮೇ 2ರಂದು  ಮಧ್ಯಾಹ್ನ 3 ಗಂಟೆಗೆ ಹರಳಹಳ್ಳಿ ಗ್ರಾಮಸ್ಥರಿಂದ ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆಯಿಂದ ಪಿ.ಡಬ್ಲ್ಯೂಡಿ ಕಛೇರಿವರೆಗೂ ಹಾಗೂ ಹರಳಹಳ್ಳಿ ಬಸ್‌ ನಿಲ್ದಾಣದಿಂದ ಶ್ರೀ ಆಂಜನೇಯ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಅಂದು ಸಂಜೆ 5ಕ್ಕೆ ಹರಳಹಳ್ಳಿ ಗ್ರಾಮಸ್ಥರಿಂದ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯುವುದು.

error: Content is protected !!