ನಗರದಲ್ಲಿ ಇಂದು ಹನುಮ ಜಯಂತಿ ಮತ್ತು ರಥೋತ್ಸವ

ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ 29ನೇ ವರ್ಷದ ವಾರ್ಷಿಕೋತ್ಸವ, ಶ್ರೀ ರಾಮದೂತ ಹನುಮ ಜಯಂತಿ ಮತ್ತು ರಥೋತ್ಸವ ಕಾರ್ಯಕ್ರಮಗಳನ್ನು ಇಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 5.55 ಕ್ಕೆ ಶ್ರೀ ಆಂಜನೇಯ ಸ್ವಾಮಿ ತೊಟ್ಟಿಲೋತ್ಸವ, ಬೆಳಿಗ್ಗೆ 8 ರಿಂದ ಪವಮಾನ ಸ್ವಾಹಾಕಾರ, ರಥಾಂಗ ಹೋಮ ಹಾಗೂ ಸಂಕಲ್ಪ, ಬೆಳಿಗ್ಗೆ 11 ಕ್ಕೆ ಪವಮಾನ ಸ್ವಾಹಾಕಾರದ ಪೂರ್ಣಾಹುತಿ, ಮಧ್ಯಾಹ್ನ 12.05 ಕ್ಕೆ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ರಥೋತ್ಸವ ನಡೆಯಲಿದ್ದು,  ಮಧ್ಯಾಹ್ನ 1.30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

error: Content is protected !!