ಚಿಕ್ಕ ಬಿದರಿ ಬಳಿ ಅಕ್ರಮ ಮರಳು ಸಂಗ್ರಹ : ಶಾಸಕ ಹರೀಶ್ ಆರೋಪ

ದಾವಣಗೆರೆ, ಏ.21- ವಿಜಯನಗರ ಚಿಕ್ಕ ಬಿದರಿ ಗ್ರಾಮದ ಬಳಿ ಸಾವಿರಾರು ಲೋಡ್  ನದಿ ಪಾತ್ರದ ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಹರಿಹರ ಶಾಸಕ ಬಿ.ಪಿ ಹರೀಶ್ ಆರೋಪಿಸಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಹರ-ಹರಪನಹಳ್ಳಿ ಗಡಿ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವರಿಂದಲೇ ಇದನ್ನು ಮಾಡಿಸಲಾಗುತ್ತಿದೆ ಎಂದು ಆರೋ ಪಿಸಿದರು. ಸಚಿವರು ಬೇರೆಯವರ ಹೆಸರಿನಲ್ಲಿ ಬಹಳಷ್ಟು ಜಮೀನು ಖರೀದಿಸಿ ಅಲ್ಲಿ ಮರಳು ಸಂಗ್ರಹಿಸಿದ್ದಾರೆ. ನಗರಸಭೆ ಸದಸ್ಯರೊಬ್ಬರಿಗೆ ಮರಳು ದಂಧೆ ಮಾಡಲು ಬಿಟ್ಟು ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿ ದ್ದಾರೆ ಎಂದರು. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಗಣಿ ಇಲಾಖೆ ನಿರ್ದೇಶಕರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.

error: Content is protected !!