ಮಾನವೀಯತೆ ಮೆರೆದ ವಿನಯ್

ಮಾನವೀಯತೆ ಮೆರೆದ ವಿನಯ್

ದಾವಣಗೆರೆ, ಏ. 21 –  ರಸ್ತೆ ಬದಿಯಲ್ಲಿ ರಾತ್ರಿ ವೇಳೆ ಅಸಹಾಯಕರಾಗಿ ಕುಳಿತಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮೂಲಕ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ. 

ಬ್ಯಾಡಗಿಯ ನಾಗಮ್ಮ ಎಂಬ ವೃದ್ಧೆ ರಸ್ತೆ ಬದಿ ಅಸಹಾಯಕರಾಗಿ ಕುಳಿತಿದ್ದರು. ಒಬ್ಬನೇ ಮಗ ಇದ್ದಾನೆ ಎಂದು ಹೇಳುತ್ತಿದ್ದ ಅಜ್ಜಿಯು ಊಟಕ್ಕೂ ಗತಿ ಇಲ್ಲ. ಮನೆಯಿಂದ ಹೊರ ಬಂದಿದ್ದೇನೆ ಎಂದು ವೃದ್ಧೆ   ಅಸಹಾಯಕತೆ ತೋಡಿಕೊಂಡರು. ಅಜ್ಜಿಯ ಮಾತುಗಳನ್ನು ಆಲಿಸಿದ ವಿನಯ್ ಕುಮಾರ್ ಅವರು, ಬಾತಿಯ ತಪೋವನದ ಶಶಿಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಹರಿಹರದ ಉತ್ತರ ಕಾಲೋನಿಯಲ್ಲಿನ ಆಶ್ರಮಕ್ಕೆ ವೃದ್ಧೆಯನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ ವಿನಯ್ ಕುಮಾರ್ ಅವರು ಅಜ್ಜಿಗೆ ನೆರವಾದರು. ಈ ವೇಳೆ ಅಜ್ಜಿಯು ವಿನಯ್ ಕುಮಾರ್ ಅವರಿಗೆ ಆಶೀರ್ವಾದ ಮಾಡಿದರಲ್ಲದೇ, ನಿಮ್ಮಂಥವರು ಬೇಕಪ್ಪಾ. ನನ್ನ ಆಶೀರ್ವಾದ ನಿನ್ನ ಮೇಲಿದೆ, ನಿನ್ನ ಸಹಾಯಕ್ಕೆ ಋಣಿಯಾಗಿರುತ್ತೇನೆ ಎಂದು ಮನದುಂಬಿ ಹಾರೈಸಿದರು. 

ವೃದ್ಧೆಗೆ ಹೊಸ ಬಟ್ಟೆ, ಊಟ, ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ವಿನಯ್ ಕುಮಾರ್ ಅವರು ಸೂಚನೆ ನೀಡಿದರು.

error: Content is protected !!