ಸವಿತಾ ಸಮಾಜ ಸಂಘದಿಂದ ನಾಳೆ ಶ್ರೀ ಹನುಮ ಜಯಂತಿ

ಸವಿತಾ ಸಮಾಜ ಸಂಘದಿಂದ  ನಾಳೆ ಶ್ರೀ ಹನುಮ ಜಯಂತಿ

ದಾವಣಗೆರೆ, ಏ. 21 – ಸವಿತಾ ಸಮಾಜ ಸಂಘದ ವತಿಯಿಂದ  ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ದಿನಾಂಕ 23 ಮಂಗಳವಾರ ಹನುಮ ಜಯಂತಿ ಆಚರಿಸಲಾಗುವುದು.  ಅಂದು ಬೆಳಿಗ್ಗೆ 8ಕ್ಕೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ನಡೆಸಲಾಗುವುದು. ಬೆಳಿಗ್ಗೆ 11 ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ  ಕಾರ್ಯಕ್ರಮ ಇರುತ್ತದೆ ಎಂದು ಸವಿತಾ ಸಮಾಜ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

error: Content is protected !!