ಜ್ಯೋತಿಷಿ ಎಸ್.ಕೆ. ಜೈನ್‌ ನಿಧನ

ಜ್ಯೋತಿಷಿ ಎಸ್.ಕೆ. ಜೈನ್‌ ನಿಧನ

ದಾವಣಗೆರೆ, ಏ. 14 – ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್‌ ಅವರು ಮೊನ್ನೆ ನಿಧನರಾಗಿದ್ದು, ಜ್ಯೋತಿಷ್ಯದ ಧ್ರುವ ತಾರೆಯಂತೆ ಮಿನುಗಿ ಮಾಯವಾಗಿರುವುದು ಜ್ಯೋತಿಷ್ಯ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದ ನಗರದ ಜ್ಯೋತಿಷಿ ಸಿ. ಕೆ. ಆನಂದತೀರ್ಥಾಚಾರ್ ಸಂತಾಪ ಸೂಚಿಸಿದ್ದಾರೆ.

1998 ಜನವರಿ  9 ಮತ್ತು 10 ರಂದು ದಾವಣಗೆರೆಯಲ್ಲಿ ನಡೆದ ಜ್ಯೋತಿಷ್ಯ ಸಮ್ಮೇಳನದಲ್ಲಿ ಎಸ್.ಕೆ. ಜೈನ್‌ ಭಾಗವಹಿಸಿ ದ್ದರು. ಅವರು ಬರೆಯುತ್ತಿದ್ದ ಕಾಲಚಕ್ರ ಪಂಚಾಂಗ ಬಹಳ ಉಪ ಯೋಗವಾಗಿತ್ತು ಎಂದು ಆನಂದತೀರ್ಥಾಚಾರ್ ತಿಳಿಸಿದ್ದಾರೆ.

error: Content is protected !!