ಬಿಜೆಪಿ ಕಾರ್ಯಕರ್ತೆಯರ ಮೇಲೆ ಅಸಭ್ಯ ವರ್ತನೆ : ಕ್ರಮಕ್ಕೆ ಆಗ್ರಹ

ದಾವಣಗೆರೆ, ಏ.8- ನಗರದ ಎಸ್‌ಒಜಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ಬಿಜೆಪಿ ಪ್ರಚಾರಕ್ಕೆ ಹೋದ ವೇಳೆ, ಗೂಂಡಾ ವರ್ತನೆ ತೋರಿಸಿದ ಕಾಂಗ್ರೆಸ್ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಮತ್ತು ಸಹಚರರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರಾದ ಎಚ್.ಸಿ. ಜಯಮ್ಮ ಒತ್ತಾಯಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ತೆರಳಿದಾಗ ಬಿಜೆಪಿ ಕಾರ್ಯಕರ್ತೆಯೊಬ್ಬರ ಸೀರೆಗೆ ಕೈ ಹಾಕಿ ಎಳೆದ ಪ್ರಸಂಗವೂ ನಡೆದಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರಾದ ಬಿ.ಕಲ್ಲೇಶಪ್ಪ, ಅಂಜಿನಪ್ಪ, ಅಂಗಡಿ ಶಂಕರಮ್ಮ, ರತ್ನಮ್ಮ, ಕುಮಾರಿ, ಮಂಜುನಾಥ, ಮಹಾಂ ತೇಶ್, ಸತೀಶ್, ಮಹಾಂತೇಶ ನಾಯ್ಕ, ಬಿಜೆಪಿ ಮುಖಂಡರಾದ ಅನಿಲ್‌ಕುಮಾರ್‌ ನಾಯ್ಕ, ಚೇತನಾ ಶಿವಕುಮಾರ್, ಚನ್ನವೀರಪ್ಪ, ಜಯಣ್ಣ ಇದ್ದರು.

error: Content is protected !!