ಜಯನಗರ ಚರ್ಚ್ ಪಾದ್ರಿ ರಾಜಶೇಖರ್ ಬಂಧನ

ದಾವಣಗೆರೆ, ಏ. 4- ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಜಯನಗರ ಚರ್ಚ್ ಪಾದ್ರಿ ರಾಜಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಮಹಿಳೆಯೊ ಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ತಂಡ ನೇಮಿಸಿದ್ದರು. ಆಂಧ್ರಪ್ರದೇಶದ ಹೈದರಾಬಾದ್‌ ನಗರದಲ್ಲಿ ಆರೋಪಿ ಯನ್ನು ಪತ್ತೆ ಮಾಡಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

error: Content is protected !!