`ಜನತಾವಾಣಿ’ಯ ಮನೋಹರಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ

`ಜನತಾವಾಣಿ’ಯ ಮನೋಹರಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ

ಚಿತ್ರದುರ್ಗದಲ್ಲಿ ಇಂದು ಪ್ರಶಸ್ತಿ ಪ್ರದಾನ

ರಾಣೇಬೆನ್ನೂರು, ಮಾ.31- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡ ಬ್ಲ್ಯುಜೆ) ಕೊಡಮಾಡುವ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗೆ ರಾಣೇಬೆನ್ನೂರು ತಾಲ್ಲೂಕಿನ  `ಜನತಾವಾಣಿ’ ಹಿರಿಯ ವರದಿಗಾರ ಮನೋಹರ ಮಲ್ಲಾಡದ ಭಾಜನರಾಗಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಗೆ  ಕೆಯುಡಬ್ಲ್ಯುಜೆ  ರಾಜ್ಯ ಘಟಕವು ಪ್ರತಿ ವರ್ಷ ದತ್ತಿ ನಿಧಿ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿ ಪಟ್ಟಿಯನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಿಡುಗಡೆ ಮಾಡಿದ್ದಾರೆ.

ಪ್ರಶಸ್ತಿಯು ತಲಾ 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿದ್ದು, ಮನೋಹರ ಮಲ್ಲಾಡದ ಅವರಿಗೆ ಪಿ.ರಾಮಯ್ಯ ಪ್ರಶಸ್ತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಳೆ ಏಪ್ರಿಲ್ 1ರಂದು ಚಿತ್ರದುರ್ಗದಲ್ಲಿ ಏರ್ಪಾಡಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಗಡೂರು ವಿವರಿಸಿದ್ದಾರೆ.

error: Content is protected !!