ಏಪ್ರಿಲ್‌ನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಪ್ರವಾಸ

ಏಪ್ರಿಲ್‌ನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಪ್ರವಾಸ

ಬಾಳೆಹೊನ್ನೂರು, ಮಾ. 29- ಏಪ್ರಿಲ್ 1 ರಿಂದ 29 ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಭಾಗವಹಿಸಲಿದ್ದಾರೆ.

ದಿನಾಂಕ 1 ರಂದು ಬೈಲಹೊಂಗಲ ತಾಲ್ಲೂಕು ವಣ್ಣೂರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ದಲ್ಲಿ, ದಿನಾಂಕ 2 ರಂದು ತೀರ್ಥಹಳ್ಳಿ ತಾಲ್ಲೂಕು ಕವಲೇದುರ್ಗ ಮಠದಲ್ಲಿ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮ, ದಿನಾಂಕ 3 ರಂದು ರಾಣೇಬೆನ್ನೂರು ತಾಲ್ಲೂಕು ಲಿಂಗದಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜೆ, ದಿನಾಂಕ 4 ರಂದು ಅಜ್ಜಂಪುರ ತಾಲ್ಲೂಕು ಗೌರಾಪುರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 5 ರಂದು ಹೊನ್ನಾಳಿ ತಾಲ್ಲೂಕು ಕುಳಗಟ್ಟಿಯಲ್ಲಿ ಇಷ್ಟಲಿಂಗ ಮಹಾಪೂಜೆ, 6 ರಂದು ಕಡೂರು ತಾಲ್ಲೂಕು ಹೊಗರೆಖಾನ್ ಶ್ರೀ ಸಿದ್ದೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜೆ, 7 ರಂದು ಚಕ್ಕಮಗಳೂರು ತಾಲ್ಲೂಕು ಮುತ್ತಿನಪುರದಲ್ಲಿ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜೆ.

8 ರಂದು ಹುಬ್ಬಳ್ಳಿ ತಾಲ್ಲೂಕು ತಿರುಮಲಕೊಪ್ಪದಲ್ಲಿ ಧರ್ಮ ಜಾಗೃತಿ ಸಮಾರಂಭ, 9 ರಂದು ತಿರುಮಲಕೊಪ್ಪ ದಲ್ಲಿ ಶ್ರೀ ಯುಗಮನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಕಾರ್ಯಕ್ರಮ, 10 ರಂದು ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 11 ಹಾಗೂ 12 ರಂದು ಧಾರವಾಡ ತಾಲ್ಲೂಕು ಅಮ್ಮಿನಭಾವಿಯಲ್ಲಿ ಧರ್ಮ ಸಮಾರಂಭ ನೂತನ ರಥೋತ್ಸವಕ್ಕೆ ಚಾಲನೆ.

13 ರಂದು ಹುಬ್ಬಳ್ಳಿ ತಾಲ್ಲೂಕು ಹಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಹಾಗೂ ಧರ್ಮ ಸಮಾರಂಭ, 14 ರಂದು ಹಾವೇರಿ ತಾಲ್ಲೂಕು ನೆಗಳೂರು ಗ್ರಾಮದಲ್ಲಿ ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಸಮಾರಂಭ, 15 ರಂದು ಕಲಘಟಗಿ ತಾಲ್ಲೂಕು ಸಂಗೇದೇವರಕೊಪ್ಪದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, 16 ರಂದು ಕಲಘಟಗಿ ತಾಲ್ಲೂಕು ಬೇಗೂರು ಗ್ರಾಮದಲ್ಲಿ ಗ್ರಾಮ ದೇವತೆ ಪ್ರತಿಷ್ಠಾಪನಾ ಸಮಾರಂಭ.

17 ರಂದು ಚಡಚಣ ತಾಲ್ಲೂಕು ಏಳಗಿ ಪಿ.ಎಸ್‌ ನಲ್ಲಿ ಶ್ರೀ ವೀರಭದ್ರಸ್ವಾಮಿ ಮಹಾದ್ವಾರ ಉದ್ಘಾಟನಾ ಸಮಾರಂಭ, 18 ರಂದು ಅಫಜಲಪುರ ತಾಲ್ಲೂಕು ಕರಟಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ, 19 ರಂದು ಚಿತ್ತಾಪುರ ತಾಲ್ಲೂಕು ಶ್ರೀ ಸಿದ್ಧೇಶ್ವರ ಜ್ಞಾನಧಾಮದಲ್ಲಿ ಧರ್ಮ ಸಮಾರಂಭ, 23 ರಂದು ಬಾಳೇಹೊನ್ನೂರು ಕ್ಷೇತ್ರದಲ್ಲಿ ಪೌರ್ಣಿಮೆ, 29 ರಂದು ಕುಂದಗೋಳ ತಾಲ್ಲೂಕು ಪಶುಪತಿಹಾಳ ಗ್ರಾಮದಲ್ಲಿ ಧರ್ಮ ಜಾಗೃತಿ ಸಮಾರಂಭದಲ್ಲಿ ಜಗದ್ಗುರುಗಳು ಪಾಲ್ಗೊಳ್ಳಲಿದ್ದಾರೆ. 

error: Content is protected !!