ಹರಿಹರ : ಶಿವಸಂಚಾರ ನಾಟಕ

ಹರಿಹರ, ಮಾ. 29- ಸಿಟಿ ಫ್ಯಾಮಿಲಿ ಸೆಂಟರ್ ಮತ್ತು ಸಾಧು ವೀರಶೈವ ಸಮಾಜ (ಹರಿಹರ) ಇವರ ಆಶ್ರಯದಲ್ಲಿ ಬರುವ ಏಪ್ರಿಲ್  1 ರಿಂದ 3ರವರೆಗೆ ಶಿವಸಂಚಾರ  ಕಾರ್ಯಕ್ರಮ ಏರ್ಪಡಿಸಲಾಗಿದೆ.

ಏಪ್ರಿಲ್ 1 ರ ಸೋಮವಾರ ಜಯಂತ್ ಕಾಯ್ಕಿಣಿ ರಚನೆಯ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ `ಜೊತೆಗಿ ರುವನು ಚಂದಿರ’ ನಾಟಕ, ಏಪ್ರಿಲ್  2 ರ ಮಂಗಳವಾರ ಕೆ.ಎಸ್. ಸಾಳಂಕಿ ರಚನೆಯ ಮಾಲತೇಶ ಆರ್. ಬಡಿಗೇರ್ ವಿನ್ಯಾಸ ನಿರ್ದೇಶನದ `ತಾಳಿಯ ತಕರಾರು’ ಹಾಗೂ ದಿನಾಂಕ 3ರ ಬುಧವಾರ ಡಾ. ನಟರಾಜ್ ಬೂದಾಳು ರಚನೆಯ ಸಿ. ಬಸವಲಿಂಗಯ್ಯ ನಿರ್ದೇಶನದ `ಕಲ್ಯಾಣದ ಬಾಗಿಲು’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಹರಿಹರ ವಿದ್ಯಾನಗರದ ಸಿಟಿ ಫ್ಯಾಮಿಲಿ ಸೆಂಟರ್‌ನಲ್ಲಿ ಪ್ರತಿದಿನ ಸಂಜೆ 7.30 ರಿಂದ ನಾಟಕ ಪ್ರದರ್ಶನ ಪ್ರಾರಂಭವಾಗಲಿದ್ದು, ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದವರು ಅಭಿನಯಿಸಲಿದ್ದಾರೆ.

error: Content is protected !!