ಎಂ.ಬಿ.ಎ. ಪರೀಕ್ಷೆಯಲ್ಲಿ ಕೆ. ಸಿರಿಲಕ್ಷ್ಮಿ ಅವರಿಗೆ ರ‍್ಯಾಂಕ್

ಎಂ.ಬಿ.ಎ. ಪರೀಕ್ಷೆಯಲ್ಲಿ  ಕೆ. ಸಿರಿಲಕ್ಷ್ಮಿ ಅವರಿಗೆ ರ‍್ಯಾಂಕ್

ದಾವಣಗೆರೆ, ಮಾ.28- ಕಳೆದ ಜುಲೈ 2023ರಲ್ಲಿ ನಡೆದ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಎಂ.ಬಿ.ಎ ಪರೀಕ್ಷೆಯಲ್ಲಿ ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂ.ಬಿ.ಎ ಕಾಲೇಜಿನ ಕು. ಕೆ.ಸಿರಿಲಕ್ಷ್ಮಿ ಅವರು 6ನೇ ರ‍್ಯಾಂಕ್ ಪಡೆದಿದ್ದಾರೆ. 

ಸಿರಿಲಕ್ಷ್ಮಿ ಅವರನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಕಾಲೇಜಿನ ಅಧ್ಯಕ್ಷ ಅಥಣಿ ಎಸ್.ವೀರಣ್ಣ, ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ಹೆಚ್.ವಿ.ತ್ರಿಭುವಾನಂದ ಅವರು ಅಭಿನಂದಿಸಿದ್ದಾರೆ.

error: Content is protected !!