ಯೋಗ ಸಾಧಕಿ ಲಾವಣ್ಯ ಶ್ರೀಧರ್‌ಗೆ ‘ಅಹಲ್ಯಾಬಾಯಿ ಹೋಳ್ಕರ್’ ಪ್ರಶಸ್ತಿ

ಯೋಗ ಸಾಧಕಿ ಲಾವಣ್ಯ ಶ್ರೀಧರ್‌ಗೆ ‘ಅಹಲ್ಯಾಬಾಯಿ ಹೋಳ್ಕರ್’ ಪ್ರಶಸ್ತಿ

ದಾವಣಗೆರೆ, ಮಾ. 28- ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಗರದ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಎಸ್.ಪಿ.ಲಾವಣ್ಯ ಶ್ರೀಧರ್ ಅವರಿಗೆ ‘ಅಹಲ್ಯಾಬಾಯಿ ಹೋಳ್ಕರ್’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ವಿಜಯಪುರ ತಾಲ್ಲೂಕಿನ ಮಲಘಾಣದಲ್ಲಿ ಇಂಚಿಗೇರಿ ಅಧ್ಯಾತ್ಮ ಸಂಪ್ರದಾಯ ಫೌಂಡೇಶನ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚಿಗೆ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಾವಣ್ಯ ಶ್ರೀಧರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲಾವಣ್ಯ ಅವರನ್ನು ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎನ್.ಪರಶುರಾಮ್, ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ಎನ್.ಗೋಪಾಲ್‌ರಾವ್, ನಿರ್ದೇಶಕರಾದ ನಾಗರಾಜ, ರಾಘವೇಂದ್ರ ಎಂ.ಚೌಹಾಣ್, ಅಜ್ಜಯ್ಯ, ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ  ವಾಸುದೇವ ರಾಯ್ಕರ್, ಪ್ರಧಾನ ಕಾರ್ಯದರ್ಶಿ ಡಾ.ಯು.ಸಿದ್ದೇಶ್  ಅಭಿನಂದಿಸಿದ್ದಾರೆ.

error: Content is protected !!