ರಾಣೇಬೆನ್ನೂರಿನಲ್ಲಿ ನಾಡಿದ್ದು ಮಾಜಿ ಸಚಿವ ಆರ್. ಶಂಕರ್ ಅಭಿಮಾನಿಗಳ ಸಭೆ

ರಾಣೇಬೆನ್ನೂರು, ಮಾ.28- ಮಾಜಿ ಸಚಿವ ಆರ್. ಶಂಕರ್ ಅವರ ಮುಂದಿನ ರಾಜಕೀಯ ಭವಿಷ್ಯ ಯಾವ ಪಕ್ಷದಲ್ಲಿ ಕಂಡುಕೊಳ್ಳಬೇಕು ಯಾವ ಪಕ್ಷ ಅವರಿಗೆ ಶ್ರೇಯಸ್ಸು ತರಬಹುದು ಎಂದು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲು ಇದೇ ದಿನಾಂಕ 31 ರಂದು ಬೆಳಿಗ್ಗೆ ರಾಣೇಬೆನ್ನೂರಿನ ಅವರ ಮನೆಯಲ್ಲಿ ಶಂಕರ್ ಅಭಿಮಾನಿಗಳ ಸಭೆ ಕರೆಯಲಾಗಿದೆ ಎಂದು ರತ್ನಾಕರ ಕುಂದಾಪೂರ ತಿಳಿಸಿದ್ದಾರೆ. ಬಿ.ಬಿ.ಎಂ.ಪಿ ಉಪ ಮೇಯರ್ ಆರ್. ಶಂಕರ್ ರಾಣೇಬೆನ್ನೂರಿಗೆ ಬಂದು ಶಾಸಕರಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.  ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಎನ್‌ಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋಲುಂಡು ಸುಮಾರು ಒಂದು ವರ್ಷ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದರು.

error: Content is protected !!