ಹರಿಹರ, ಮಾ.28- ನಗರದ ಸಿಟಿ ಫ್ಯಾಮಿಲಿ ಸೆಂಟರ್ ವತಿಯಿಂದ ಸಾಧು ವೀರಶೈವ ಸಮಾಜದ ಆಶ್ರಯದಲ್ಲಿ ಏಪ್ರಿಲ್ 1ರಿಂದ 3ರವರೆಗೆ ಶಿವ ಸಂಚಾರ-23 ಕಾರ್ಯಕ್ರಮ ನಡೆಯಲಿವೆ.
ಏಪ್ರಿಲ್ 1ರ ಸಂಜೆ 7.30ರಿಂದ, ಜಯಂತ್ ಕಾಯ್ಕಿಣಿ ರಚಿಸಿದ ಹಾಗೂ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ `ಜತೆಗಿರುವವನು ಚಂದಿರ’ ನಾಟಕ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 2ರ ಸಂಜೆ 7.30ರಿಂದ, ಕೆ.ಎಸ್. ಸಾಳುಂಕಿ ರಚಿಸಿದ ಮತ್ತು ಮಾಲತೇಶ್ ಆರ್. ಬಡಿಗೇರ್ ಅವರ ವಿನ್ಯಾಸ ನಿರ್ದೇಶನದ `ತಾಳಿಯ ತಕರಾರು’ ನಾಟ್ಯ ಪ್ರದರ್ಶನವಿದೆ.
ಏಪ್ರಿಲ್ 3ರ ಸಂಜೆ 7.30ರಿಂದ ಡಾ. ನಟರಾಜು ಬೂದಾಳು ರಚಿಸಿದ, ಸಿ. ಬಸವಲಿಂಗಯ್ಯ ನಿರ್ದೇಶನದ `ಕಲ್ಯಾಣದ ಬಾಗಿಲು’ ನಾಟಕ ಪ್ರದರ್ಶನವಾಗಲಿದೆ.