ಕುಂಬಳೂರಿನಲ್ಲಿ ಇಂದು ಹನುಮಂತ ದೇವರ ರಥೋತ್ಸವ

ಕುಂಬಳೂರಿನಲ್ಲಿ ಇಂದು ಹನುಮಂತ ದೇವರ ರಥೋತ್ಸವ

ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ಇಂದು ಜರುಗಲಿದೆ. 

ಇಂದು ಬೆಳಗಿನ ಜಾವ 5 ಗಂಟೆಗೆ ಸ್ವಾಮಿಯ `ಮಹಾರಥೋತ್ಸವವು’ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ ದೇವರಗಳೊಡಗೊಡಿ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಶ್ರೀ ಸ್ವಾಮಿಯ ಬೇಟೆ ಆಡಿ ಬರುವುದಕ್ಕೆ ಹೋಗುವುದು, ನಂತರ 11.30ರವರೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದ್ದು, ಅನ್ನ ಸಂತರ್ಪಣೆ ನಡೆಯಲಿದೆ. 

ಸಂಜೆ 4 ಗಂಟೆಗೆ ಮುಳ್ಳು ತುಳಿಯುವುದು, ಶ್ರೀ ಸ್ವಾಮಿಯು ಕುದುರೆ ವಾಹನದ ಮೇಲೆ ಕುಣಿಯುವುದು,  ಇರುತ್ತದೆ. ರಾತ್ರಿ 9 ಕ್ಕೆ ಕಂಕಣ ಬಿಚ್ಚುವುದು, ನಂತರ ಓಕಳಿ, ಭೂತಗಳ ಮಣೇವು ಸೇವೆಯೊಂದಿಗೆ ಜಾತ್ರಾ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಸಂಜಯ್ ಶ್ರೀನಿವಾಸರಾವ್, ರಾಜೀವ್‌ ಭೀಮರಾವ್‌ ತಿಳಿಸಿದ್ದಾರೆ.

error: Content is protected !!