ನಗರದಲ್ಲಿ ಇಂದು ತರಬೇತಿ

ಮುದೇಗೌಡ್ರ ರೇವಣಸಿದ್ದಪ್ಪ ಸ್ಕೂಲ್ ಆಫ್ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್‌ ಕಾಲೇಜ್‌ನಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಬಿಸಿಎ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನದ ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ವೆಂಕಟೇಶ್ ಬಾಬು ಉದ್ಘಾಟಿಸುವರು. ದಾವಿವಿಯ  ಪ್ರೊ. ಸತ್ಯನಾರಾಯಣ, ಪ್ರೊ. ಶ್ರೀಹರ್ಷ ಮತ್ತು ಪ್ರೊ.ಸುಹಾಸ್, ಜೈನ್ ಇನ್‌ಸ್ಟಿಟ್ಯೂಟ್‌ನ ಪ್ರೊ.ಎಂ.ಎಸ್.ವಿಜಯ್ ಸಂಪನ್ನೂಲ ವ್ಯಕ್ತಿಗಳಾಗಿ ಆಗಮಿಸುವರು.

ಎಂಆರ್ಎಂ ಟ್ರಸ್ಟ್ ಅಧ್ಯಕ್ಷ ಡಾ.ಮುದೇಗೌಡ್ರ ಬಸವರಾಜ್ ಇವರ ಮಾರ್ಗದರ್ಶನದಲ್ಲಿ ನೆರವೇರಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ಎಸ್. ಮುನವಳ್ಳಿ ಮಠ ವಹಿಸುವರು.

error: Content is protected !!