ನಗರದಲ್ಲಿ ಇಂದು ಮಜ್ಜಿಗೆ, ನೀರು ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಉಚಿತವಾಗಿ ಮಜ್ಜಿಗೆ ಹಾಗೂ ನೀರು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವ್ಯಾಪಾರ, ಉದ್ಯೋಗ, ಆಸ್ಪತ್ರೆ ವಿವಿಧ ಕಾರ್ಯಗಳಿಗೆ ಬಂದಂತಹ ಜನರ ಬಿಸಿಲಿನ ದಾಹ ತಣಿಸುವ ದೃಷ್ಟಿಯಿಂದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತ, ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಕೆ.ಆರ್. ಮಾರ್ಕೆಟ್ ಮತ್ತು ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮದ ಜತೆಗೆ ಜ್ಞಾನ ದಾಸೋಹದ ಕಲ್ಪನೆಯಿಂದ ಪುಸ್ತಕ, ಪೋಸ್ಟರ್ ಸಹ ಕೊಡಲಾಗುವುದು.

error: Content is protected !!