ಜೈಲು ಶಿಕ್ಷೆ ಅನುಭವಿಸಿದ ಜನಾರ್ದನ ರೆಡ್ಡಿ ಬಿಜೆಪಿ ಸೇರಿದಾಕ್ಷಣ ಪರಿಶುದ್ಧವಾಗುವರೇ : ಡಿಬಿ

ದಾವಣಗೆರೆ,ಮಾ. 25- ಭ್ರಷ್ಟಚಾರದ ಆರೋಪ ಹೊತ್ತು ಜೈಲಿಗೆ ಹೋಗಿ, ಬಳ್ಳಾರಿಯಿಂದಲೇ ಗಡಿಪಾರು ಆಗಿರುವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ತಕ್ಷಣ ಪರಿಶುದ್ಧವಾಗುವರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ವ್ಯಂಗ್ಯವಾಡಿದ್ದಾರೆ.

ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಭ್ರಷ್ಟಚಾರದ ಕಾರಣಕ್ಕಾಗಿ ಬಿಜೆಪಿಯಿಂದಲೇ ಉಚ್ಛಾಟಿಸಿದ್ದ ಬಿಜೆಪಿ ಹೈಕಮಾಂಡ್, ಇದೀಗ ಬಿಜೆಪಿಗೆ ಸೇರಿಸಿಕೊಂಡು, ಬಿಜೆಪಿ ಭ್ರಷ್ಟ ಪಾರ್ಟಿ ಎಂದು ರುಜುವಾತು ಮಾಡಿದೆ. ದೇಶದ ವಿವಿಧ ರಾಜ್ಯಗಳ ವಿರೋಧ ಪಕ್ಷದ ನಾಯಕರ ಮೇಲೆ ಆದಾಯ ತೆರಿಗೆ, ಇಡಿ, ಸಿಬಿಐ ಮೂಲಕ ದಾಳಿ ಮಾಡಿಸಿ, ಭ್ರಷ್ಟರು ಬಿಜೆಪಿ ಸೇರಿದ ತಕ್ಷಣ ಪರಿಶುದ್ಧವಾಗುತ್ತಾರೆ ಎಂಬಂತೆ ಮೋದಿ, ಅಮಿತ್ ಶಾ ನಡೆದುಕೊಂಡು ಬರುತ್ತಿದ್ದಾರೆ. 

ದೇಶದ ಇತಿಹಾಸದಲ್ಲಿ ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಖರೀದಿ ಮಾಡಿದ ರೀತಿಯಲ್ಲಿ ಶಾಸಕರನ್ನು ಖರೀದಿ ಮಾಡುವ ಕೆಟ್ಟ ಸಂಪ್ರದಾಯದ ಜನ್ಮದಾತರು ಬಿಜೆಪಿಯವರು ಎಂದು ಅವರು ಹೇಳಿದ್ದಾರೆ.

error: Content is protected !!