ಬಸ್‌ನಲ್ಲಿ ಸೀಟು ಕಾಯ್ದಿರಿಸಲು ಇಟ್ಟಿದ್ದ ಬ್ಯಾಗ್ ಕಳವು : ಬಂಧನ

ದಾವಣಗೆರೆ, ಮಾ. 24- ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 35 ಗ್ರಾಂ ತೂಕದ ಬಂಗಾರದ ಚೈನ್, ಒಂದು ಮೊಬೈಲ್ ವಶ ಪಡಿಸಿಕೊಂಡಿದ್ದಾರೆ.

ಚನ್ನಗಿರಿ ವಾಸಿ ಮಮತಾ ಅವರು ಸಂಬಂಧಿಕರ ಗೃಹ ಪ್ರವೇಶದ ಪ್ರಯುಕ್ತ ಹೆಚ್.ಕಲಪನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು ಸಂಜೆ ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್‌ಗೆ ಬಂದಿದ್ದಾರೆ. ಬಸ್ ರಷ್ ಇದ್ದ ಕಾರಣ ಸೀಟ್ ಹಿಡಿಯಲು ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಸೀಟ್ ಮೇಲೆ ಇಟ್ಟು ಒಳ ಹೋಗಿ ನೋಡಿದ್ದಾಗ ಬ್ಯಾಗ್ ಕಳುವಾಗಿತ್ತು.

ಬ್ಯಾಗ್‌ನಲ್ಲಿ 1.80 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ವಿವೋ ಮೊಬೈಲ್ ಇತ್ತು ಎಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಹರಪನಹಳ್ಳಿ ತಾಲ್ಲೂಕಿನ ಶಿವಕುಮಾರ್ ಕೆ.ಸಿ. (56) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿತನನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ  ಪಿಎಸ್‍ಐ ರಮೇಶ್, ಎಎಸ್‍ಐ ರಾಜಪ್ಪ, ಸಿಬ್ಬಂದಿಗಳಾದ  ಅರುಣ ಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವ ಕುಮಾರ್, ಹನುಮಂತಪ್ಪ, ಗೀತಾ ಹೆಚ್. ಅವರುಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲ್ಯಾಘಿಸಿದ್ದಾರೆ.

error: Content is protected !!