ಕೊಲೆ ಪ್ರಕರಣದ ಆರೋಪಿ ಬಂಧನ

ದಾವಣಗೆರೆೆ, ಮಾ. 24- ಶೀಲ ಶಂಕಿಸಿ ಪತ್ನಿಯನ್ನು ಕೊಂದ ಆರೋಪಿ ಯನ್ನು ಇಲ್ಲಿನ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ರಮನ್ ಕುಮಾರ್ ಥಾಮ (40)  ಬಂಧಿತ. ಇವನು ಪತ್ನಿ ಹಾಗೂ ಮಕ್ಕಳೊಂದಿಗೆ ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದ ಕನಕ ಪೀಠದ ಹತ್ತಿರದ ಅಕ್ಷಯ್ ಹೋಟೆಲ್‌ನಲ್ಲಿ ಕೆಲಸ ಮಾಡಿ ಕೊಂಡು ಸಮೀಪದಲ್ಲಿಯೇ ಮನೆಯೊಂದರಲ್ಲಿ ವಾಸವಾಗಿದ್ದ.

ಹೆಂಡತಿಯ ಶೀಲ ಶಂಕಿಸಿ ಮನೆಯಲ್ಲಿದ್ದ ಲತ್ತುಣಿಕೆ ಹಾಗೂ ತರಕಾರಿ ಕತ್ತರಿಸುವ ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.

error: Content is protected !!