ದಾವಣಗೆರೆ, ಮಾ. 22- ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ದಾವಣಗೆರೆ ಶಾಖೆ ವತಿಯಿಂದ ಸ್ವರಚಿತ ಆಧುನಿಕ ವಚನಗಳಿಗೆ ಆಹ್ವಾನ ಮಾಡಲಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲ. ನಾಳೆ ದಿನಾಂಕ 23 ರೊಳಗಾಗಿ ವಿವೀಲಿಂಏಪ ಅಧ್ಯಕ್ಷ ರೇವಣ್ಣ ಬಳ್ಳಾರಿ (9448339322) ಅವರನ್ನು ಸಂಪರ್ಕಿಸಬಹುದು. ಇದೇ ದಿನಾಂಕ 24 ರಂದು ಬೆಳಿಗ್ಗೆ 10.30 ಕ್ಕೆ ನಗರದ ರೋಟರಿ ಬಾಲಭವನದಲ್ಲಿ ನಡೆಯುವ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದವರನ್ನು ಪುರಸ್ಕರಿಸಲಾಗುವುದು.
July 24, 2024