ನಾಗಮ್ಮರಿಗೆ ವನಿತಾ ಸಾಹಿತ್ಯ ವೇದಿಕೆ ಸಂತಾಪ

ದಾವಣಗೆರೆ, ಮಾ.17- ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ನಿಧನಕ್ಕೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ನಾಗಮ್ಮ ಅವರು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯನ್ನು 1997ರಲ್ಲಿ ಹುಟ್ಟುಹಾಕಿ ಮಹಿಳಾ ಸಾಹಿತಿಗಳನ್ನು ಒಂದುಗೂಡಿಸಿ ಪ್ರತಿಭಾವಂತ ಮಹಿಳೆ ಯೊಬ್ಬರಿಗೆ ವನಿತ ಸಾಹಿತ್ಯ ಶ್ರೀ ಪ್ರಶಸ್ತಿ ಕೊಟ್ಟು ಪ್ರೋತ್ಸಾಹಿಸುತ್ತಿದ್ದ ಧೀಮಂತ ಮಹಿಳೆ – ಅನನ್ಯ ಸಾಧಕರಾಗಿದ್ದರು ಎಂದು ವೇದಿಕೆ ಕಂಬನಿ ಮಿಡಿದಿದೆ. 

ವನಿತಾ ಸಾಹಿತ್ಯ ವೇದಿಕೆಯ ಮಲ್ಲಮ್ಮ ನಾಗರಾಜ್, ಸಂಧ್ಯಾ ಸುರೇಶ್, ಅನ್ನಪೂರ್ಣ ಪಾಟೀಲ್, ಓಂಕಾರಮ್ಮ ರುದ್ರಮುನಿ ಸ್ವಾಮಿ, ಉಮಾದೇವಿ ಮುಂತಾದವರು ನಾಗಮ್ಮನವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

error: Content is protected !!