ನಾಗಮ್ಮ ಕೇಶವಮೂರ್ತಿ ನಿಧನ : ಎಸ್ಸೆಸ್, ಎಸ್ಸೆಸ್ಸೆಂ ಸಂತಾಪ

ದಾವಣಗೆರೆ, ಮಾ.17- ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿಯವರ ನಿಧನಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌‌.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಗಮ್ಮ ಕೇಶವಮೂರ್ತಿ ಅವರು ಕಾಂಗ್ರೆಸ್ ಪಕ್ಷದಿಂದ ಮಾಯಕೊಂಡ ಮತ್ತು ದಾವಣಗೆರೆ ಕ್ಷೇತ್ರವನ್ನು ಪ್ರತಿನಿಧಿಸಿ ಸಚಿವರಾಗಿ ಉತ್ತಮ ಕೆಲಸ ಮಾಡಿರುವುದನ್ನು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಹಿರಿಯ ರಾಜಕಾರಣಿ  ಶ್ರೀಮತಿ ನಾಗಮ್ಮ ಸಿ ಕೇಶವಮೂರ್ತಿ ಅವರ  ನಿಧಾನಕ್ಕೆ ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸಂತಾಪ ವ್ಯಕ್ತಪಡಿಸಿದ್ದಾರೆ.  ಆರು ದಶಕಕ್ಕೂ ಹೆಚ್ಬು ಕಾಲ ಬಡ ಜನರ ಸೇವೆ ಸಲ್ಲಿಸಿದ್ದ ಸಿಎನ್ಕೆ, ಬಡಜನರು ಅವರನ್ನು ದಾವಣಗೆರೆಯ ಇಂದಿರಾ ಗಾಂಧಿ ಎಂದು ಕರೆಯುತ್ತಿದ್ದರು. ಮಹಿಳಾ ಸಬಲೀಕರಣಕ್ಕಾಗಿ ವನಿತಾ ಸಮಾಜವನ್ನು ಸ್ಥಾಪನೆ ಮಾಡಿ ಸಾವಿರಾರು ಮಹಿಳೆಯರ ನೆರವಿಗೆ ನಿಂತಿದ್ದರು ಎಂದು ಬಸವರಾಜ್ ಹೇಳಿದ್ದಾರೆ.

ನಾಗಮ್ಮ ಕೇಶವಮೂರ್ತಿ ನಿಧನಕ್ಕೆ ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ಸ್ನೇಹ ಮಹಿಳಾ ಬಳಗದ ಗೌರವಾಧ್ಯಕ್ಷೆ ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಶಿವನಕೆರೆ ಬಸವಲಿಂಗಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!