ಕೊಡದಗುಡ್ಡಕ್ಕೆ ಇಂದು ಶ್ರೀ ರಂಭಾಪುರಿ, ಶ್ರೀ ಕೇದಾರ ಜಗದ್ಗುರುಗಳು

ಕೊಡದಗುಡ್ಡಕ್ಕೆ ಇಂದು ಶ್ರೀ ರಂಭಾಪುರಿ, ಶ್ರೀ ಕೇದಾರ ಜಗದ್ಗುರುಗಳು

ಶ್ರೀ ವೀರಭದ್ರಸ್ವಾಮಿ ವಸತಿ ಗೃಹ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಂಕುಸ್ಥಾಪನೆ

ಜಗಳೂರು ತಾಲ್ಲೂಕು ಸುಕ್ಷೇತ್ರ ಕೊಡದ ಗುಡ್ಡದಲ್ಲಿ ಶ್ರೀ ರಂಭಾಪುರಿ-ಶ್ರೀ ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ವೀರಭದ್ರಸ್ವಾಮಿ ವಸತಿ ಗೃಹ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಂಕು ಸ್ಥಾಪನೆ, ದೇವಿಕೆರೆ ಗ್ರಾಮದಲ್ಲಿನ ಮಹಾದ್ವಾರ ಉದ್ಘಾಟನೆಯ ಅಂಗವಾಗಿ ಉಭಯ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಸಂಸ್ಕೃತಿ ಜಾಗೃತಿಗಾಗಿ ಧರ್ಮ ಸಮಾರಂಭವು ಇಂದು ಜರುಗುವುದು.

ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗುವ ಸಮಾರಂಭದಲ್ಲಿ ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ಕಣ್ವ ಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾ ಚಾರ್ಯ ಸ್ವಾಮಿಗಳು, ಹೊನ್ನಾಳಿ ಹಿರೇ ಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾ ಚಾರ್ಯ ಸ್ವಾಮಿಗಳು ಹಾಗೂ ಶಿರಾಳಕೊಪ್ಪ ವಿರಕ್ತ ಮಠದ ಸಿದ್ಧೇಶ್ವರ ದೇವರು ನೇತೃತ್ವ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ದೇವೀಕೆರೆ ಜೆ.ಆರ್.ರವಿಚಂದ್ರ, ದಾವಣಗೆರೆಯ ಬಿ.ಸಿ. ಉಮಾ ಪತಿ, ಎಸ್.ಕೆ. ಶಶಿಧರ, ಕೊಗುಂಡಿ ಬಕ್ಕೇಶಪ್ಪ, ದೇವರಮನೆ ಶಿವಕುಮಾರ, ಚಿದಾನಂದಪ್ಪ, ಹೆಚ್.ಬಿ. ಮಂಜಪ್ಪ ಅನೇಕ ಗಣ್ಯರು ಭಾಗವಹಿಸುವರು. 

error: Content is protected !!