ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಿಗ್ಗೆ 7.30 ಕ್ಕೆ ಗುಗ್ಗಳ ಕಾರ್ಯಕ್ರಮದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಇಂದಿನಿಂದ ಇದೇ ದಿನಾಂಕ 14 ರವರೆಗೆ ವಿಶೇಷ ಪೂಜೆ ನಡೆಯಲಿದ್ದು, ದಿನಾಂಕ 15 ಮತ್ತು 16 ರಂದು ಜಗತ್ ಕಲ್ಯಾಣಕ್ಕಾಗಿ ಮಹಾಧನ್ವಂತರಿ, ಮಹಾಸುದರ್ಶನ, ಶತ್ರುಬಾಧೆ ನಿವಾರಣಾ ಹೋಮ, ಸರ್ವಸಿದ್ಧಿ, ಕಳಾಭಿವೃದ್ಧಿ, ಪಂಚರುದ್ರ ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 17 ರಂದು ಮುತ್ತಿನ ರಾಶಿ ಮಂಡಕ್ಕಿ ಪಳಾರ ಹಂಚಲಾಗುವುದು. ಶ್ರೀ ಕ್ಷೇತ್ರ ಸ್ಥಾಪಕರಾದ ಮಾತಾ ಅನ್ನಪೂರ್ಣೆ ರಾಜಮ್ಮನವರ 32 ನೇ ವರ್ಷದ ಪುಣ್ಯಾರಾಧನೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಎಸ್.ಎಸ್. ಗಣೇಶ್, ರೇಖಾ ಗಣೇಶ್, ಎಸ್.ಎಸ್. ಬಕ್ಕೇಶ್, ಪ್ರೀತಿ ಬಕ್ಕೇಶ್, ಹೆಚ್.ಬಿ. ಅರವಿಂದ್, ಅಥಣಿ ಎಸ್. ವೀರಣ್ಣ, ಶಾಸಕರಾದ ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಸದಸ್ಯೆ ಸವಿತಾ ಹುಲ್ಮನಿ ಗಣೇಶ್ ಮತ್ತಿತರರು ಭಾಗವಹಿಸಲಿದ್ದಾರೆ.