ನಗರದಲ್ಲಿ ಇಂದು ಸುಭಾಷಿತ ಸಂಗ್ರಹಗಳ ಬಿಡುಗಡೆ

ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ನಲ್ಲೂರು ಲಕ್ಷ್ಮಣ್‍ರಾವ್ ರೇವಣಕರ್ ವಿರಚಿತ 12, 13ನೇ ಭಾಗದ ಅಧ್ಯಾತ್ಮಿಕ ಪರಂಪರೆಯ ಸುಭಾಷಿತ ಸಂಗ್ರಹದ ಹೊತ್ತಿಗೆಗಳ ಲೋಕಾರ್ಪಣೆ ಸಮಾರಂಭವು ಇಂದು ಸಂಜೆ 6 ಗಂಟೆಗೆ ಶ್ರೀಮತಿ ಗೌರಮ್ಮ ನರ ಹರಿಶೇಟ್ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪುಸ್ತಕಗಳ ಲೋಕಾರ್ಪಣೆಯನ್ನು  ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ  ಡಾ. ಎಚ್.ವಿ.ವಾಮದೇವಪ್ಪ ನೆರವೇರಿಸಲಿದ್ದಾರೆ.   

error: Content is protected !!