ನಗರದ ವಿಠಲ ದೇವಸ್ಥಾನದಲ್ಲಿಂದು

ನಗರದ ವಿಠಲ ದೇವಸ್ಥಾನದಲ್ಲಿಂದು

ದಾವಣಗೆರೆಯ ಶ್ರೀ ಭಾವಸಾರ ಕ್ಷತ್ರಿಯ ದೈವ ಮಂಡಳಿ (ರಿ.ನಂ.7) ಯ ಭಜನಾ ಮಂಡಳಿ ವತಿಯಿಂದ ಮಹಾರಾಜ ಪೇಟೆಯ ಶ್ರೀ ವಿಟ್ಠಲ ಮಂದಿರದಲ್ಲಿ ಶ್ರೀ ವಿಟ್ಠಲ ರುಛಉಮಾಯಿ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆಯ 46ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಇಂದು ಬೆಳಿಗ್ಗೆ 8ಕ್ಕೆ ಜ್ಞಾನೇಶ್ವರಿ ಪಾರಾಯಣ ಮುಕ್ತಾಯ ಸಮಾರಂಭ, ಬೆಳಿಗ್ಗೆ 9.30ಕ್ಕೆ ಶ್ರೀ ವಿಠಲ ರುಕ್ಮಾಯಿ ದೇವರ ರಥೋತ್ಸವ, ಮಹಿಳಾ ಮಂಡಳಿಯಿಂದ ಕುಂಭಾಭಿಷೇಕ, ಭಜನೆಯೊಂದಿಗೆ ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ.

ಮಧ್ಯಾಹ್ನ 1ಕ್ಕೆ ಶ್ರೀ ಸಂತ ಪೂಜೆ, ಮಧ್ಯಾಹ್ನ 1.15ಕ್ಕೆ ವಿಶೇಷ ಪಾವುಲ ಭಜನೆ, ಮಧ್ಯಾಹ್ನ 2ಕ್ಕೆ ಶ್ರೀ ಸಂತ ಸಮಾರಾಧನೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.

error: Content is protected !!