ಹರಪನಹಳ್ಳಿ, ಮಾ. 8 – ಮತದಾನದಿಂದ ವಂಚಿತರಾಗದೆ, 18 ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎನ್ನುವ ಜಾಗೃತಿ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸ್ವ ಸಹಾಯ ಸಂಘ, ಪ್ರೇರಣಾ ಶೈಕ್ಷಣಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಹೇಮರಡ್ಡಿ ಮಲ್ಲಮ್ಮ ಐಟಿಐ ಕಾಲೇಜು ಇವರ ಸಂಯುಕ್ತಾಶ್ರಮದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರಾದ ಶಾಂತಕುಮಾರ, ಉಪನ್ಯಾಸಕರಾದ ಬಸವರಾಜ, ಅನಿತಾ, ನಾಗರಾಜ, ಚನ್ನಪ್ಪ ಕಂಬಳಿ, ಸಂಸ್ಥೆಯ ನಿರ್ದೇಶಕಿ ಶ್ವೇತಾ ಸೇರಿದಂತೆ ಇತರರು ಇದ್ದರು.