ನಗರದ ಸತ್ಯಸಾಯಿ ಮಂದಿರದಲ್ಲಿ ಇಂದು ಶಿವರಾತ್ರಿ

ಮಹಾ ಶಿವರಾತ್ರಿಯ ಪ್ರಯುಕ್ತ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರ ( ಸತ್ಯಂ-ಶಿವಂ-ಸುಂದರಂ) ದಲ್ಲಿ ಇಂದು ಬೆಳಗ್ಗೆ 5.15 ರಿಂದ,  ನಾಳೆ ಶನಿವಾರ ಬೆಳಿಗ್ಗೆ 6 ರವರೆಗೆ ವಿವಿಧ ಧಾರ್ಮಿಕ ಸಾಧನೆಗಳು ನಡೆಯಲಿವೆ.  ಬೆಳಿಗ್ಗೆ 5.15ಕ್ಕೆ ಓಂಕಾರ, ಸುಪ್ರ ಭಾತ ಮತ್ತು ನಗರ ಸಂಕೀರ್ತನೆ ಇರುತ್ತದೆ. 7 ಗಂಟೆಗೆ  ಶ್ರೀ ಸಾಯೀಶ್ವರ ಲಿಂಗಕ್ಕೆ ರುದ್ರಾಭಿ ಷೇಕ ನಡೆಯಲಿದೆ.  ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಶ್ರೀ ಸಾಯೀಶ್ವರ ಲಿಂಗಕ್ಕೆ ರುದ್ರಾಭಿಷೇಕ ಏಕಾದಶ ರುದ್ರಾಭಿಷೇಕ ನಡೆ ಯಲಿದೆ.  ರಾತ್ರಿ 7 ಗಂಟೆಯಿಂದ 8 ಗಂಟೆಯ ವರೆಗೆ ಸಾರ್ವಜನಿಕರು  ರುದ್ರಾಭಿ ಷೇಕ ನಡೆಸಲು ಅವಕಾಶವಿರುತ್ತದೆ.  ಇಂದು ರಾತ್ರಿ 8 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆಯ ವರೆಗೆ ಭಜನೆಯ ಮೂಲಕ ಜಾಗರಣೆ ನಡೆಯಲಿದೆ ಎಂದು ಸಂಚಾಲಕರಾದ ಪಾಂಡುರಂಗ ರಾವ್ ತಿಳಿಸಿದ್ದಾರೆ.

error: Content is protected !!